Posts

Showing posts with the label ಯೆರೆಮಿಯನ ಆರನೇ ವಿಖ್ಯಾಪನೆ; ಯೆರೆಮಿಯ 20:7–18

ಯೆರೆಮಿಯನ ಆರನೇ ವಿಖ್ಯಾಪನೆ - ಯೆರೆಮಿಯ 20:7–18

Image
ಮುನ್ನುಡಿ ಯೆರೆಮಿಯ 20:7–18 " ಯೆರೆಮಿಯನ ವಿಖ್ಯಾಪನೆಗಳು " ( Confessions of Jeremiah ) ಎಂದು ಕರೆಯಲಾಗುವ ಭಾಗದ ಕೊನೆಯ ವಿಖ್ಯಾಪನೆ . ತನ್ನ ಈ ಆರನೇ ವಿಖ್ಯಾಪನೆಯಲ್ಲಿ , ಯೆರೆಮಿಯ ವಿರೋಧ , ತಿರಸ್ಕಾರ ಮತ್ತು ಮಾನಸಿಕ ಹಿಂಸೆಯ ತನ್ನ ಅಂತರಂಗದ ತುಮುಲಗಳನ್ನು ಬಹಿರಂಗಪಡಿಸುತ್ತಾನೆ . ಆರನೇ ವಿಖ್ಯಾಪನೆ ಅದರ ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿದೆ . ಈ ಭಾಗ, ಪ್ರವಾದಿಯನ್ನು ಅವನ ಅತ್ಯಂತ ದುರ್ಬಲ ವ್ಯಕ್ತಿಯಂತೆ ತೋರಿಸುತ್ತದೆ ; ಪ್ರವಾದಿತನದ ಮಾನಸಿಕ ಮತ್ತು ಆಧ್ಯಾತ್ಮಿಕ ಕಷ್ಟಗಳ ಬಗ್ಗೆ ಸಾಟಿಯಿಲ್ಲದ ಒಳನೋಟವನ್ನು ಒದಗಿಸುತ್ತದೆ . ಈ ಪಠ್ಯ, ದೇವರ ವಿರುದ್ಧದ ಆರೋಪದಿಂದ , ದೇವರ ಇರುವಿಕೆಯ ದೃಢೀಕರಣದ ಕಡೆಗೆ , ಅಂತಿಮವಾಗಿ, ಆಳವಾದ ಹತಾಶೆಯ ಕಡೆಗೆ ಚಲಿಸುತ್ತದೆ , ಅದರಲ್ಲಿ ಯೆರೆಮಿಯ ತನ್ನ ಸ್ವಂತ ಹುಟ್ಟನ್ನು ಸಹ ಶಪಿಸುವುದನ್ನು ಕಾಣಬಹುದು . ತಿರಸ್ಕಾರ ಮತ್ತು ಕಿರುಕುಳದ ಭಾವನಾತ್ಮಕ ನೋವು ಸಂದರ್ಭ ವಿಖ್ಯಾಪನೆಯನ್ನು ಪರಿಶೀಲಿಸುವ ಮೊದಲು , ನಾವು ಅದರ ತಕ್ಷಣದ ಸಂದರ್ಭವನ್ನು ಅರ್ಥಮಾಡಿಕೊಳ್ಳೋಣ . “ ಸರ್ವೇಶ್ವರನ ಆಲಯದ ಮುಖ್ಯ ಅಧಿಕಾರಿಯಾಗಿದ್ದ ಇಮ್ಮೇರನ ಮಗನಾದ ಯಾಜಕ ಪಷ್ಹೂರ ಯೆರೆಮಿಯ   ಪ್ರವಾದಿಸುವುದನ್ನು ಕೇಳಿದನು . ಆಗ ಪಷ್ಹೂರ ಯೆರೆಮಿಯನನ್ನು ಹೊಡೆದು ಸರ್ವೇಶ್ವರನ ಆಲಯದ ಮೇಲಿನ ಬೆನ್ಯಾಮಿನ್ ದ್ವಾರದಲ್ಲಿದ್ದ ಸೆರ...