Posts

ಯೆರೆಮಿಯನ ಗ್ರಂಥದ ಮತ್ತು ಅವನ ಆರು ವಿಖ್ಯಾಪನೆಗಳ ಪರಿಚಯ

Image
ಪ್ರವಾದಿ ಯೆರೆಮಿಯನ ಗ್ರಂಥದಲ್ಲಿ ಯೆರೆಮಿಯನ ವಿವರವಾದ ಜೀವನಚರಿತ್ರೆಯನ್ನು ಕಾಣುತ್ತೇವೆ, ಇದು ಹಳೆಯ ಒಡಂಬಡಿಕೆಯ ಪ್ರವಾದಿಗಳ ಆಂತರಿಕ ಜೀವನವನ್ನು ನೋಡಲು ಕೂಡ ನಮಗೆ ಹೆಚ್ಚಿನ ಸಹಾಯ ನೀ ಡುತ್ತದೆ. ಮಾತ್ರವಲ್ಲ, ಜೂಡಾದ ಅಂತಿಮ ದಿನಗಳ ಮತ್ತು ಜೆರುಸಲೆಮ್ ಪತನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ತಿಳಿದಿರುವ ಹೆಚ್ಚಿನ ವಿಚಾರಗಳು ಯೆರೆಮಿಯನ ಗ್ರಂಥದಿಂ ದಲೇ ನಮಗೆ  ತಿಳಿದು ಬರುತ್ತದೆ . ಯೆರೆಮಿಯನ ಗ್ರಂಥ ನಮಗೆ ಒಬ್ಬ ವಾಗ್ಮಿಯನ್ನು, ದೇವರೊಂದಿಗಿನ ಸಂಬಂಧದಲ್ಲಿ ಸೂಕ್ಷ್ಮತೆಯನ್ನು ಹೊಂದಿದ್ದ ವ್ಯಕ್ತಿಯನ್ನು ಮತ್ತು ಜೂಡಾದ ಜನರಿಗೆ ದೇವರ ಸಂದೇಶವನ್ನು ನಿರರ್ಗಳವಾಗಿ ಘೋಷಿಸುತ್ತಿದ್ದ ವ್ಯಕ್ತಿಯನ್ನು  ಪರಿಚಯಿಸುತ್ತದೆ. ಇಸ್ರಯೇಲ್‌ ರಾಷ್ಟ್ರದ ನಿರ್ಣಾಯಕ ಹಾಗೂ ಬಹು ಮುಖ್ಯವಾದ ಸಮಯದಲ್ಲಿ ದಕ್ಷಿಣ ದಲ್ಲಿದ್ದ ಜೂಡಾ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಯೆರೆಮಿಯನನ್ನು ದೇವರು ಕರೆದರು. ಸುಮಾರು ಅರ್ಧ ಶತಮಾನ, ಆ ದಂಗೆಕೋರ ಜನರಿಗೆ ಯೆರೆಮಿಯ ದೇವರ ವಾಕ್ಯವನ್ನು ಸಾರಿದನು. ಪಶ್ಚಾತ್ತಾಪಪಡುವಂತೆ ಸಾರುತ್ತಿದ್ದ ಯೆರೆಮಿಯನ ಕೂಗಿಗೆ ಪ್ರತಿಯಾಗಿ, ರಾಜರು, ಪ್ರವಾದಿಗಳು, ಯಾಜಕರು ಮತ್ತು ಜೂಡಾದ ನಿವಾಸಿಗಳು ಅವನ ಮಾತನ್ನು ಕೇಳಲು ನಿರಾಕರಿಸಿದರು. ಜನರ ತಿರಸ್ಕಾರ ಎಷ್ಟಿತ್ತೆಂದರೆ , ಯೆರೆಮಿಯ ತಾನು ಒಬ್ಬ ಪ್ರವಾದಿಯೋ ಅಲ್ಲವೋ ಎಂಬ ಸಂಶಯದೊಡನೆ ತನ್ನ ಆಂತರ್ಯದಲ್ಲಿ ಹೋರಾಡುವಂತೆ ಮಾಡಿತ್ತು. ಯೆರೆಮಿಯ ಜೆರುಸಲೆಮಿನ ಉತ್ತರದಲ್ಲಿರುವ ಅ...

ಯೆರೆಮಿಯನ ಆರನೇ ವಿಖ್ಯಾಪನೆ - ಯೆರೆಮಿಯ 20:7–18

Image
ಮುನ್ನುಡಿ ಯೆರೆಮಿಯ 20:7–18 " ಯೆರೆಮಿಯನ ವಿಖ್ಯಾಪನೆಗಳು " ( Confessions of Jeremiah ) ಎಂದು ಕರೆಯಲಾಗುವ ಭಾಗದ ಕೊನೆಯ ವಿಖ್ಯಾಪನೆ . ತನ್ನ ಈ ಆರನೇ ವಿಖ್ಯಾಪನೆಯಲ್ಲಿ , ಯೆರೆಮಿಯ ವಿರೋಧ , ತಿರಸ್ಕಾರ ಮತ್ತು ಮಾನಸಿಕ ಹಿಂಸೆಯ ತನ್ನ ಅಂತರಂಗದ ತುಮುಲಗಳನ್ನು ಬಹಿರಂಗಪಡಿಸುತ್ತಾನೆ . ಆರನೇ ವಿಖ್ಯಾಪನೆ ಅದರ ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿದೆ . ಈ ಭಾಗ, ಪ್ರವಾದಿಯನ್ನು ಅವನ ಅತ್ಯಂತ ದುರ್ಬಲ ವ್ಯಕ್ತಿಯಂತೆ ತೋರಿಸುತ್ತದೆ ; ಪ್ರವಾದಿತನದ ಮಾನಸಿಕ ಮತ್ತು ಆಧ್ಯಾತ್ಮಿಕ ಕಷ್ಟಗಳ ಬಗ್ಗೆ ಸಾಟಿಯಿಲ್ಲದ ಒಳನೋಟವನ್ನು ಒದಗಿಸುತ್ತದೆ . ಈ ಪಠ್ಯ, ದೇವರ ವಿರುದ್ಧದ ಆರೋಪದಿಂದ , ದೇವರ ಇರುವಿಕೆಯ ದೃಢೀಕರಣದ ಕಡೆಗೆ , ಅಂತಿಮವಾಗಿ, ಆಳವಾದ ಹತಾಶೆಯ ಕಡೆಗೆ ಚಲಿಸುತ್ತದೆ , ಅದರಲ್ಲಿ ಯೆರೆಮಿಯ ತನ್ನ ಸ್ವಂತ ಹುಟ್ಟನ್ನು ಸಹ ಶಪಿಸುವುದನ್ನು ಕಾಣಬಹುದು . ತಿರಸ್ಕಾರ ಮತ್ತು ಕಿರುಕುಳದ ಭಾವನಾತ್ಮಕ ನೋವು ಸಂದರ್ಭ ವಿಖ್ಯಾಪನೆಯನ್ನು ಪರಿಶೀಲಿಸುವ ಮೊದಲು , ನಾವು ಅದರ ತಕ್ಷಣದ ಸಂದರ್ಭವನ್ನು ಅರ್ಥಮಾಡಿಕೊಳ್ಳೋಣ . “ ಸರ್ವೇಶ್ವರನ ಆಲಯದ ಮುಖ್ಯ ಅಧಿಕಾರಿಯಾಗಿದ್ದ ಇಮ್ಮೇರನ ಮಗನಾದ ಯಾಜಕ ಪಷ್ಹೂರ ಯೆರೆಮಿಯ   ಪ್ರವಾದಿಸುವುದನ್ನು ಕೇಳಿದನು . ಆಗ ಪಷ್ಹೂರ ಯೆರೆಮಿಯನನ್ನು ಹೊಡೆದು ಸರ್ವೇಶ್ವರನ ಆಲಯದ ಮೇಲಿನ ಬೆನ್ಯಾಮಿನ್ ದ್ವಾರದಲ್ಲಿದ್ದ ಸೆರ...